Friday, January 6, 2023

ಆನಂದ & ಸಮಾಧಾನ

 Study Circle- ಚಿಂತನಾ ಸರಣಿ -20 ದಿ.03-01-23

(ಪ.ಪೂ.ಗುರುಗಳ ಪ್ರವಚನದಿಂದ)

卐卐卐卐卐卐卐卐卐卐卐卐卐卐卐卐卐卐

ಇಲ್ಲಿ ನಾವು ಈಗ ಆನಂದ, ಸಮಾಧಾನ ಇವುಗಳ

ಬಗೆಗೆ ನಮ್ಮ ಭಾರತೀಯ ಋಷಿಮುನಿಗಳು ತಮ್ಮ

ದೀರ್ಘಕಾಲೀನ ಚಿಂತನೆಯ ಮೂಲಕ ,ಈ ಆನಂದಕ್ಕೂ ಮೆಟ್ಟೆಲುಗಳು ಅಥವಾ ಆನಂದದ ಪ್ರಮಾಣ ಹೇಗೆ ಹೆಚ್ಚು ಹಚ್ಚು ಇರುತ್ತದೆ ಎಂಬುದರ 

ಬಗೆಗೆ ತೈತ್ತರೀಯ ಉಪನಿಷತ್ ನಲ್ಲಿ ಹೇಳಿರುತ್ತಾರೆ.

ಈಗ ನಮಗೆ ಭಗವಂತನ ಪರಿಚಯವೇ ಸರಿಯಾಗಿ

ಇಲ್ಲದ ಮೇಲೆ ಅವನ ಆನಂದದ ಸ್ವರೂಪದ ಬಗೆಗೆ

ಕಲ್ಪನೆಯಾದರೂ ಹೇಗೆ ಬರುತ್ತದೆ.ಅಂದರೆ 

ನಿರುಪಾಧಿಕ ಆನಂದದ ಕಲ್ಪನೆ ಬರುವುದು ಸ್ವಲ್ಪ

ಕಷ್ಟ ಸಾಧ್ಯ ಇರುತ್ತದೆ.ಈಗ ಈ ಆನಂದದ ಮೆಟ್ಟಿಲು

ಹೇಗೆ ಹೇಳಿರುತ್ತಾರೆ ನೋಡೋಣ.ಈಗ ಸದ್ಯ ನಮಗೆ

ಇರುವುದು ಸ್ಥೂಲ ಮರ್ತ್ಯಲೋಕದ ಶರೀರ.ಇದರಿಂದ

ಅನುಭವಿಸುವ, ಅಂದರೆ ಒಬ್ಬ ಚಕ್ರವರ್ತಿ ವೈಭವ

ಐಶಾರಾಮಿ, ಯವ್ವನದಿಂದ ಇರುವಂತಹ ವ್ಯಕ್ತಿ

ಪಡುವ ಆನಂದವನ್ನು ಒಂದು ಪ್ರಮಾಣ ಎಂದರೆ,ಅಂದರೆ ಈ ಭೂಲೋಕದಲ್ಲಿ ವಸ್ತು ವ್ಯಕ್ತಿ ಮತ್ತು ಪರಿಸ್ಥಿತಿಗಳಿಂದ ಪಡೆಯಬಹುದಾದ ಹೆಚ್ಚಿನ

ಆನಂದ ಇದು ಆನಂದದ ಮೊದಲ ಪ್ರಮಾಣ ಅಥವಾ

ಮೆಟ್ಟಿಲು ಆದರೆ, ನಂತರ,ಇಂತಹ ಆನಂದದ ನೂರು

ಪಟ್ಟು ಹೆಚ್ಚಿಗೆ ಆದರೆ ಅದು ಒಂದು ಮನುಷ್ಯ ಗಂಧರ್ವರ ಒಂದು ಆನಂದ ,ಇಂತಹ ನೂರು ಗಂಧರ್ವರ ಆನಂದವೆಂದರೆ ಒಂದು ದೇವಗಂಧರ್ವ

ಆನಂದ, ಹೀಗೆ ನೂರು ದೇವ ಗಂಧರ್ವರ ಆನಂದ

ಎಂದರೆ ಒಂದು ಪಿತೃ ಲೋಕದ ಆನಂದ, ಇಂತಹ

ನೂರು ಪಿತೃಆನಂದ ಎಂದರೆ ಒಂದು ಸ್ವಯಂ ಸಿದ್ಧ

ದೇವ ಆನಂದ,ಇಂತಹ ನೂರು ಸ್ವಯಂ ಸಿದ್ಧರ ಆನಂದ

ಎಂದರೆ ,ಒಂದು ಕರ್ಮಸಿದ್ಧ ದೇವ ಆನಂದ, ಇಂತಹ

ನೂರು ಕರ್ಮಸಿದ್ಧ ಆನಂದ ಎಂದರೆ ಅವರು ಕರ್ಮದ

ಸಹಾಯದಿಂದ ದೇವತ್ವ ಪಡೆದಿರುತ್ತಾರೆ, ಇಂತಹ ಕರ್ಮ

ದೇವರ ನೂರು ಆನಂದ ಅಂದರೆ ,ದೇವರ ಒಂದು 

ಆನಂದ ಆಗುತ್ತದೆ, ಅಂದರೆ ಇಂದ್ರ ಲೋಕದ ದೇವತೆ,

ಇಂತಹ ದೇವರ ನೂರು ಆನಂದ ಸೇರಿ ಇಂದ್ರನ

ಒಂದು ಆನಂದವಾಗುತ್ತದೆ.ಈ ಇಂದ್ರನ ನೂರು ಆನಂದವು ,ಬ್ರಹಸ್ಪತಿ ಅಂದರೆ ದೇವತೆಗಳ ಗುರುವಿನ

ಒಂದು ಆನಂದವಾಗುತ್ತದೆ.ಇಂಥ ಬ್ರಹಸ್ಪತಿಯ

ನೂರು ಆನಂದಗಳು ಸೇರಿ ಒಂದು ಪ್ರಜಾಪತಿಯ

ಆನಂದವಾಗುತ್ತದೆ.ಇಂಥ ಪ್ರಜಾಪತಿಯ ನೂರು

ಆನಂದ ಸೇರಿದರೆ ಒಂದು ಬ್ರಹ್ಮನ ಆನಂದ

ಆಗುತ್ತದೆ, ಇನ್ನು ಮುಂದಿನ ಆನಂದ ಅಳತೆಗೆ ಸಿಗುವದಿಲ್ಲ.ಅಂದರೆ ಮಹೇಶ, ವಿಷ್ಣು ಇವರ ಆನಂದ

ಅನಂತ ಅಪಾರ.

*" ಇಂಥ ಈ ಆನಂದವು ಯಾರು ನಿಷ್ಕಾಮ ಹಾಗೂ 

ಆತ್ಮಜ್ಞಾನಿಗೆ ಸಿಗುತ್ತದೆ ತಾತ್ಪರ್ಯವೆಂದರೆ,.ಈ ಎಲ್ಲ ತರಹದ ಆನಂದಗಳು ಯಾರು ಭಗವಂತನ ಸಾಕ್ಷಾತ್ಕಾರದ ಪರಮೋಚ್ಚ

ಅನುಭವ ,ಆಧ್ಯಾತ್ಮ ಲೋಕದ ಚಕ್ರವರ್ತಿ ಸಮಾನ

ಇರುತ್ತಾರೋ ಅವರು ಅನುಭವಿಸುತ್ತಾರೆ"*

ಈಗ ಕಲ್ಪನೆ ಮಾಡಿರಿ ನಾವು ಮನುಷ್ಯ ಭಾವದಲ್ಲಿ

ಅಥವಾ ಸ್ವರ್ಗದಲ್ಲಿ ಅನುಭವಿಸುವ ಆನಂದಗಳು

ಎಷ್ಟು ಕ್ಷುಲ್ಲಕವಾದದ್ದವು, ಪುಣ್ಯ ಕ್ಷೀಣವಾದರೆ 

ಮತ್ತೆ ಏನಾಗಿ ಹುಟ್ಟುವೆವೊ ಗೊತ್ತಿಲ್ಲ.ಇದು 

ಒಂದು ಆದರೆ.ಇನ್ನೊಂದು *"ಕೇವಲ ಕೇವಲ 

ಮನುಷ್ಯರಾಗಿ ಹುಟ್ಟಿ ಸಾಧನೆ ಮಾಡಿ ಈ ಪರಮೋಚ್ಚ

ಅವಸ್ಥೆಯನ್ನು ಪಡೆಯಲು ಸಾಧ್ಯ.

ಉನ್ನತ ಲೋಕಗಳಲ್ಲಿ ಸುಖ ಹೊಂದುತ್ತಿರು ಯಾವದೇ

ಲೋಕದವರು ಈ ಪರಮೋಚ್ಚ ಆನಂದವನ್ನು 

ಪಡೆಯಬೇಕು ಎಂದರೆ *" ಮಾನವರಾಗಿಯೇ

ಹುಟ್ಟಿ ಬರಬೇಕು*"ಬೇರೆ ಯಾವದೇ ವಿಧದಿಂದಲೂ

ಶಕ್ಯವಿಲ್ಲ ಎಂದು ಹೇಳುತ್ತಾರೆ.ಆದ್ದರಿಂದಲೇ

ದಾಸರು ಹೀಗೆ *"ಮಾನವ ಜನ್ಮ ದೊಡ್ಡದು ,ಇದ

ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ"*ಎಂದು

ಹಾಡಿರುತ್ತಾರೆ, ಸಮರ್ಥರು *"ನರದೇಹ ಸ್ತವನ"*ಎನ್ನುವ ಸಮಾಸ ದಾಸಬೋಧದಲ್ಲಿ 

ಬರೆದಿರುತ್ತಾರೆ,ಈಗಲಾದರೂ ನಮಗೆ ಮನುಷ್ಯ

ಜನ್ಮದ ಸಾರ್ಥಕತೆ ಮಾಡಿಕೊಳ್ಳುವ ಸರಳ ಸಾಧನೆ

ಆದ ನಾಮಸ್ಮರಣೆ ಮಾಡುವ ಶಾರದೆಯ ಕೃಪೆ ಆಗಲಿ

ಸದ್ಗುರುಗಳ ಕೃಪೆ ಆಗಲಿ......!...ಆನಂದವು

ದೇಹದಲ್ಲಿ ಅನುಭವಿಸಬೇಕಾಗಿರುತ್ತದೇನೊ ನಿಜ,

ಆದರೆ ಅದು ದೇಹದ ಮೂಲಕ ಅನುಭವಿಸುವದಲ್ಲ

ಇದನ್ನು ಕುರಿತು ಚಿಂತನೆ ಮಾಡೋಣ...!...

ಅವಧೂತ ತನಯ

*"ಜಾನಕಿ ಜೀವನ ಸ್ಮರಣ ಜಯ ಜಯ ರಾಮ"*

ಭಗವಂತನ ದರ್ಶನ ಅಥವಾ ಆತ್ಮಜ್ಞಾನಿಯ ಆನಂದ ಇದರ ಕಿಮ್ಮತ್ತು

 Study Circle- ಚಿಂತನಾ ಸರಣಿ -21 ದಿ.03-01-23

(ಪ.ಪೂ.ಗುರುಗಳ ಪ್ರವಚನದಿಂದ)

卐卐卐卐卐卐卐卐卐卐卐卐卐卐卐卐卐卐

ಭಗವಂತನ ದರ್ಶನ ಅಥವಾ ಆತ್ಮಜ್ಞಾನಿಯ ಆನಂದ

ಎಷ್ಟು ಉಚ್ಚ ಮಟ್ಟದ್ದು ಇರುತ್ತದೆ ಎನ್ನುವುದನ್ನು

20 ರ ಚಿಂತನಾ ಸರಣಿಯಲ್ಲಿ ಚಿಂತನೆ ಆಯಿತು.ಇನ್ನು

ಇದರ ಕಿಮ್ಮತ್ತು ಅಂದರೆ ಮೌಲ್ಯ ಎಷ್ಟು ಉನ್ನತ

ಮಟ್ಟದ್ದು ಇರಬಹುದು.ಇದನ್ನು ಕಠೋಪನಿಷತ್ತಿನ 

ನಚಿಕೇತನ ಪ್ರಸಂಗದಲ್ಲಿ ಹೇಳಲಾಗಿದೆ.ನಚಿಕೇತನ ತಂದೆಯಾದ ವಾಜಶ್ರವಸ ನು ,ಕೋಪದ ಭರದಲ್ಲಿ

ನಿನ್ನನ್ನು ಯಮನಿಗೆ ದಾನ ಕೊಟ್ಟಿದ್ದೇನೆ ಹೋಗು ಎಂದನು.ಅವನು ಯಮಲೋಕಕ್ಕೆ ಹೋದಾಗ ಅವನ

ಮನೆ ಬಾಗಿಲಲ್ಲಿ ಕೂಡಬೇಕಾಯಿತು.ಯಮ ಬಂದು

ನೋಡಿದಾಗ ಇವನನ್ನು ನೋಡಿ ಇವನಿಗೆ ಮೂರು ವರ

ಕೇಳಲು ಹೇಳಿದನು.ಮೊದಲನೆಯ ವರದಲ್ಲಿ ತಂದೆಯು

ಕ್ರೋಧರಹಿತನಾಗಲಿ, ಪ್ರೀತಿಯುಳ್ಳವನಾಗಲಿ ಎಂದು,

ಎರಡನೆಯ ವರವಾಗಿ ಯಾವ ರೀತಿಯ ಯಜ್ಞ 

ಮಾಡುವದರಿಂದ ಮನುಷ್ಯನು ಸ್ವರ್ಗಪ್ರಾಪ್ತಿ 

ಮಾಡಿಕೊಳ್ಳಬಹುದು ಎಂದು ,ಮೂರನೆಯದಾಗಿ

ಮೃತ್ಯುವಿನ ರಹಸ್ಯ, ಆತ್ಮಜ್ಞಾನ ಕುರಿತು ಕೇಳಿದನು.

ಯಮನು ಆದರ ಪ್ರೀತಿಗಳಿಂದ ಇದನ್ನು ಕೇಳಬೇಡ 

ಎಂದನು.ಅದಕ್ಕೆ ನಚಿಕೇತ ಒಪ್ಪಲಿಲ್ಲ.ಅದಕ್ಕೆ ಯಮನು

ನೂರಾರು ವರ್ಷಗಳ ಅಥವಾ ಬೇಕೆನಿಸಿದಷ್ಟು ವರ್ಷ,

ಆಯುಸ್ಸು, ಮೃತ್ಯುಲೋಕದ ಸಕಲ ಐಶ್ವರ್ಯ ಭೋಗ

,ಚಕ್ರವರ್ತಿ ಪಟ್ಟ ಏನೆನೊ ಬೇಕೊ ಕೇಳು ಕೊಡುತ್ತೇನೆ,

ಆದರೆ ಆತ್ಮಜ್ಞಾನ ಕೇಳಬೇಡ ಎಂದನು.ಅಂದರೆ

ಆತ್ಮಜ್ಞಾನದ ಮೌಲ್ಯ ಕಟ್ಟಲು ಸಾಧ್ಯವೇ ಇಲ್ಲ ಎಂಬುದು ಇದರಿಂದ ತಿಳಿಯುತ್ತದೆ.ಕೊನೆಗೆ ನಚಿಕೇತನು ಎಷ್ಟೇ ಭೋಗ ಭೋಗಿಸಿದರೊ ಒಂದಲ್ಲ

ಒಂದು ದಿನ ಕ್ಷೀಣವಾಗಿ ಮುಗಿಯುವ ಯಾವ ಭೋಗಗಳೂ ಬೇಡ, ಎಷ್ಟೇ ಆಯುಷ್ಯ ಇದ್ದರೂ

ಅದೂ ಮುಗಿಯುವದೇ, ಹಣ ಸುವರ್ಣ ಎಷ್ಟಿದ್ದರೂ ತೃಪ್ತಿ ಅನ್ನುವುದು ಆಗುವದು ಶಕ್ಯವೇ ಇಲ್ಲ ಎಂದು

ಅತ್ಯಂತ ಧೃಢ ಭಾವದಿಂದ ಕೊಡುವುದಾದರೆ

ಕೇವಲ ಆತ್ಮಜ್ಞಾನ ಕೊಡು ಎಂದಾಗ ಯಮನು

ಇವನ ವೈರಾಗ್ಯದಿಂದ ತೃಪ್ತನಾಗಿ ಅವನಿಗೆ 

ಅದರ ರಹಸ್ಯ ಹೇಳುತ್ತಾನೆ.ಅಂದರೆ ದೇಹಕ್ಕೆ ಎಷ್ಟೇ

ಉಪಚಾರ ಆದರ ಮಾಡಿದರೂ ಅದೇನೂ ಸಾರ್ಥಕ

ಆಗಲಾರದು,ಧಾರಣೆಗೆ ಎಷ್ಟು ಬೇಕೊ ಅಷ್ಟೆ ಅದಕ್ಕೆ

ಕೊಡಬೇಕು ಎನ್ನುವ ಸತ್ಯ ಅವನಿಗೆ ತಿಳಿದಿತ್ತು.

ಇದರಿಂದ ನಮಗೆ ಆತ್ಮಜ್ಞಾನದ ಮೌಲ್ಯ ಹಾಗೂ ಅದರ

ಪ್ರಮಾಣ ಎರಡರ ಬಗೆಗೆ ಚಿಂತನೆ ಆಯಿತು.

ಆನಂದವೆಂದರೆ ಪೂರ್ಣ ಸಮಾಧಾನ, ಸಮಾಧಾನ

ಎಂದರೆ ಆತ್ಮಶಾಂತಿ ಅಥವಾ ಆತ್ಮತೃಪ್ತಿ .

ಆನಂದವೆಂದರೆ ದೇಹಸುಖ ಅಲ್ಲ.ಅಥವಾ ದೇಹದ

ಸ್ವಸ್ಥತೆ ಅಲ್ಲ.ಇಲ್ಲಿ ಗಮನಕ್ಕೆ ಬರುವದು ಏನೆಂದರೆ,

ಇಂದ್ರಿಯಗಳಿಗೆ ಕಾಣುವ ಹಾಗೂ ದೇಹದಿಂದ

ಅನುಭವಿಸಲು ಬರುವ ದೃಶ್ಯವಸ್ತುಗಳಿಂದ ಇಂಥ

ಆನಂದ ಆಗಲು ಶಕ್ಯವೇ ಇಲ್ಲ.ಆನಂದವು ದೇಹದಲ್ಲಿ

ಅನುಭವಿಸವದಾಗಿರುತ್ತದೇನೊ ನಿಜ ಆದರೆ ಅದು

ದೇಹದ ಮೂಲಕ ಅಲ್ಲ.ಈ ಆನಂದವನ್ನು ಅನ್ನಮಯ,

ಪ್ರಾಣಮಯ,ಮನೋಮಯ ಹಾಗೂ ವಿಜ್ಞಾನಮಯ

ಕೋಶಗಳನ್ನು ದಾಟಿ ಅನುಭವಿಸುವದಿರುತ್ತದೆ.

ಅಂದರೆ ದೇಹದ ಪರಿಸ್ಥಿತಿ ಅತ್ಯಂತ ಪ್ರತಿಕೂಲ ಇದ್ದರೂ

ಜಗತ್ತಿನ ದೃಷ್ಟಿಯಿಂದ ಸುಖವಿಲ್ಲದಿದ್ದರೂ, 

ಪರಮಾರ್ಥ ಸಾಧನೆಯಿಂದ ಮೇಲೆ ಹೇಳಿದ ನಾಲ್ಕೂ

ಕೋಶಗಳನ್ನು ದಾಟಿ ಮನುಷ್ಯನು ಆನಂದದ

ಅನುಭವ ಅಂದರೆ ,ಆತ್ಮಜ್ಞಾನ ,ಅಥವಾ ಭಗವಂತನ

ದರ್ಶನದ ಅನುಭವ ಪಡೆಯಬಲ್ಲನು.ಅಂದರೆ 

ಪ್ರಾಪ್ತ ಪರಿಸ್ಥಿತಿಯಲ್ಲಿ ಸಮಾಧಾನ ಹೊಂದಿ ಅದರ

ಅಖಂಡತೆ ಸಂಪಾದಿಸುವ ಮನಸ್ಸಿನ ತಯಾರಿ ಮಾಡುವುದೆ ಸಾಧನೆ ಆಗಿರುತ್ತದೆ.ಈಗ 

ಮನುಷ್ಯನ ಅವಸ್ಥೆಗಳನ್ನು ಕುರಿತು ಚಿಂತನೆ 

ಮಾಡೋಣ.ಸಾಮಾನ್ಯವಾಗಿ ನಮಗೆ ನಿತ್ಯ ಮೂರು

ಅವಸ್ಥೆಗಳ ಅನುಭವ ಇರುತ್ತದೆ.ಅವು, ಜಾಗ್ರತ್, ಸ್ವಪ್ನ

ಹಾಗೂ ಸುಷುಪ್ತಿ (ಗಾಢ ನಿದ್ರಾವಸ್ದೆ).....!..

ಅವಧೂತ ತನಯ 

*"ಜಾನಕಿ ಜೀವನ ಸ್ಮರಣ ಜಯ ಜಯ ರಾಮ"*

ॐॐॐॐॐॐॐॐॐॐॐॐॐॐॐॐॐॐॐ

ಕರ್ಮ ಮತ್ತು ಕರ್ಮಫಲ ಇವುಗಳ ನಿಷ್ಠಾ

 Study Circle- ಚಿಂತನಾ ಸರಣಿ -22 ದಿ.05-01-23

(ಪ.ಪೂ.ಗುರುಗಳ ಪ್ರವಚನದಿಂದ)

卐卐卐卐卐卐卐卐卐卐卐卐卐卐卐卐卐卐

ಕರ್ಮ ಮತ್ತು ಕರ್ಮಫಲ ಇವುಗಳ ನಿಷ್ಠಾ ಕಡಿಮೆ

ಆಗದ ಹೊರತು ಪರಮಾರ್ಥ ಆಗೋದಿಲ್ಲ.ಅಂದರೆ

ನಾನು ಕಷ್ಟಪಟ್ಟು ದುಡಿಯೋದರಿಂದ ನನಗ ಇಷ್ಟು

ಅಥವಾ ಇಂಥದ್ದು ಸಿಗಲೇಬೇಕು.ಅನ್ನೋ ನಮ್ಮ ಧೃಢ

ಭಾವನಾ ಏನು ಇದೆ ,ಇದೇ ನಮಗೆ ಈ ಪ್ರಪಂಚದಲ್ಲಿ

ದುಃಖಕ್ಕೆ ಕಾರಣ ಆಗುತ್ತದೆ.ನಮ್ಮ ಈ ನಿಷ್ಠಾ ದಿಂದ ನಾವು ಭಗವಂತನ ಕಡೆಯಿಂದ ಈ ಪ್ರಪಂಚದ ವ್ಯವಸ್ಥೆಯನ್ನೇ ನಮ್ಮ ಕೈಯಲ್ಲಿ ತೆಗೆದುಕೊಂಡ ಹಾಗೆ ಆಗುತ್ತದೆ.ಆದರೆ ಈ ಜಗತ್ತಿನ ವ್ಯವಸ್ಥೆಯಲ್ಲಿ ನಮ್ಮದು ಏನೂ ನಡೆಯುವದಿಲ್ಲ.ಇದು ನಮಗೆ ಅನಿಸುವದಿಲ್ಲ.

ಪರಿಣಾಮ,ಕ್ರೋಧ ,ಲೋಭ ,ಮೋಹ ಎಲ್ಲಾ

ತರಹದ ದುಃಖಗಳು ನಮ್ಮ ಪಾಲಿಗೆ ಬರುತ್ತವೆ.

ಕೆಲವೊಮ್ಮೆ ಎಷ್ಟು ಪರಿಣಾಮ ಆಗುತ್ತದೆ ಅಂದರೆ

ಭಗವಂತನ ಮೇಲೆಯೇ ಕೋಪ ಮಾಡುತ್ತೇವೆ,

ಗುರುಗಳ ಮೇಲೆಯೇ ಕೋಪ ಮಾಡುತ್ತೇವೆ.

ಯಾವಾಗ ಚಿತ್ತದಿಂದ ಒಂದು ವಾಸನೆ ಮನಸ್ಸಿನಲ್ಲಿ

ಬಂತು ,ಅಂದ ಕೂಡಲೇ ಬುದ್ಧಿ ಮೊದಲಾದ ವ್ಯವಸ್ಥೆಗಳು ಮುಂದಿನ ಅಂದರೆ ಆ ವಸ್ತು ಪಡೆಯಲು

ಏನು ಕರ್ಮ ಮಾಡಬೇಕು ಎಂಬುದರ ಕಡೆಗೆ

ನಮ್ಮನ್ನು ತೊಡಗಿಸುತ್ತವೆ.ಅಂದರೆ ಯಾವಾಗ ಇಂಥ

ಒಂದು ವಸ್ತುವಿನಿಂದ ನನಗೆ ಸುಖ ಸಿಗುತ್ತದೆ, 

ಅನಿಸಿ ಅದನ್ನು ಪಡೆಯಬೇಕು ಎನ್ನುವ ಈ ಧೃಢ

ಭಾವನೆಯೇ ನಮ್ಮನ್ನು ಈ ಪ್ರಪಂಚದಲ್ಲಿ ಕರ್ಮ

ಚಕ್ರದಲ್ಲಿ ತೊಡಗಿಸಿಬಿಟ್ಟಿದೆ.ಒಂದರ ನಂತರ 

ಒಂದು ,ಹಾಗೆಯೇ ಈ ಚಕ್ರ ನಮ್ಮನ್ನು ತಿರುಗಿಸ

ತೊಡಗುತ್ತದೆ.ಜೀವನದಲ್ಲಿ ಧಡಪಡ ಶುರು ಆಗುತ್ತದೆ.

ಆ ವಸ್ತವಿಗಾಗಿ ಕಷ್ಟ ಪಡುತ್ತೇವೆ.ಅಂದರೆ ಇದು ನಮ್ಮನ್ನು ಆಕುಂಚಿತ ತನ, ಅಜ್ಞಾನ ಇದರಲ್ಲಿ ಮುಳುಗಿಸುತ್ತದೆ.ಆದ್ದರಿಂದ ನಮಗೆ ಇದೇ ಕಷ್ಟಪಡುವದನ್ನು ನಾಮಸ್ಮರಣೆಗೆ ತೊಡಗಿಸುವದಿಲ್ಲ.

ಅಂದರೆ ಕಷ್ಟಪಡುವುದೇ ಆದರೆ ನಾಮಸ್ಮರಣೆಗೆ

ಕಷ್ಟಪಟ್ಟರೆ ನಮಗೆ ನಿಜವಾದ ಸಮಾಧಾನ ಸಿಗುತ್ತದೆ

ಎಂಬ ತಿಳುವಳಿಕೆ ನಮಗೆ ಬರುವದಿಲ್ಲ.ನಾವು ಎಷ್ಟು

ಅಜ್ಞಾನಮಟ್ಟಿ ಅಥವಾ ಅಜ್ಞಾನಮಯ ಆಗಿರುತ್ತೇವೆ

ಅಂದರೆ ನಮಗೆ ಅದೇ ಸಹಜ ಸ್ವಭಾವ ಆಗಿಬಿಟ್ಟಿದೆ.

ಸಣ್ಣವರು ಜಪಮಾಲೆ ಹಿಡಿದರೆ ,ಅದನ್ನೇನು 

ಮಾಡುತ್ತಿರುವಿ, ಏನಾದರೂ ಓದು ಪರಿಕ್ಷೆ ಉತ್ತಮ

ಪಾಸುಮಾಡು ದೊಡ್ಡ ಪಗಾರದ ನೌಕರಿ ಬರುತ್ತದೆ.

ಆರಾಮ ಇರು.ನಾಳೆ ವಯಸ್ಸಾದ ಮೇಲೆ ಅದನ್ನೇ

ಮಾಡುವದು ಇದೆ ಎಂದು ಅತ್ಯಂತ ಸಹಜವಾಗಿ

ಹೇಳಿಬಿಡುತ್ತೇವೆ.ಸತ್ಪುರುಷರು ತಮ್ಮ ತಲೆ ಚಚ್ಚಿಕೊಳ್ಳಬೇಕು ಅಷ್ಟೇ.ಇಷ್ಟು ನಮ್ಮ ಅಜ್ಞಾನದ

ಸ್ವಭಾವ ಆಗಿಬಿಟ್ಟಿರುತ್ತದೆ.ಎಲ್ಲಿಯವರೆಗೆ ಅಂದರೆ

ಆವರಿಗೇನು ತಿಳಿಯುತ್ತದೆ ಗುರುಗಳಿಗೆ, ನಿನ್ನ

ಅಭ್ಯಾಸ ,ಶಿಕ್ಷಣ ನೋಡಿಕೊ ಎಂದು ನಾವು

ಮಕ್ಕಳಿಗೆ ಹೇಳುತ್ತೇವೆ.ನಾವು ನಾಮಸ್ಮರಣೆ ಮಾಡದೇ

ಇದ್ದರೇ ಗುರುಗಳೇನೂ ಜವಾಬ್ದಾರಿ ಅಲ್ಲ.

ಇದು ನಮ್ಮ ಇಂದಿನ ಅಜ್ಞಾನಮಯ ಜಾಗೃತಿ 

ಅವಸ್ಥೆ ಆಗಿರುತ್ತದೆ !!!.ಈ ದೃಷ್ಟಿಯಿಂದ ನಮ್ಮ ಸ್ವಪ್ನದ

ಅವಸ್ಥೆ, ಸುಷುಪ್ತಿ ಅವಸ್ಥೆ ಮಿಥ್ಯಾ ಅನಿಸುತ್ತವೆ.

ಇನ್ನು ಸ್ವಪ್ನದಲ್ಲಿ ,ಏನೇನೋ ಎಲ್ಲರೀತಿಯ, ರಾಗದ್ವೇಷ

ಮೋಹಗಳ ವ್ಯವಹಾರ ಮಾಡುತ್ತೇವೆ.ಆಗ ಜಾಗ್ರತ 

ಅವಸ್ಥೆಯ ಅರಿವು ಇರುವದಿಲ್ಲ.ಅಂದರೆ ಸ್ವಪ್ನದ

ಅವಸ್ಥೆಯ ದೃಷ್ಟಿಯಿಂದ ಜಾಗೃತ ಹಾಗೂ ಸುಷುಪ್ತಿ

ಎರಡು ಅವಸ್ಥೆಗಳು ಮಿಥ್ಯಾ ಅನಿಸುತ್ತವೆ.

ಇನ್ನು ಸುಷುಪ್ತಿ ಅವಸ್ಥೆ ಅಂದರೆ ಗಾಢ ಸ್ವಪ್ನರಹಿತ

ವಿಚಾರ ರಹಿತ ಅವಸ್ಥೆಯಲ್ಲಿ ಅಂದರೆ ಆನಂದದ

ಅವಸ್ಥೆಯಲ್ಲಿ ನಾವು ಇರುತ್ತೇವೆ.ಇದು ಎಷ್ಟು ಆನಂದ

ಅನಿಸುತ್ತದೆ ಅಂದರೆ, ಯಾರಾದರೂ ಸೇರುವಂಥ

ಸಿಹಿತಿನಿಸು ತಿನ್ನಲು ಎಬ್ಬಿಸಿದರೂ ಎಳಲು ಮನಸ್ಸು

ಆಗುವದಿಲ್ಲ, ಎಬ್ಬಿಸಿದವರಿಗೆ ಯಾಕಾದರೂ ಎಬ್ಬಿಸಿದಿರಿ

ಎಂಥ ಆನಂದದ ನಿದ್ರೆಯಲ್ಲಿ ಇದ್ದೆ ಎಂದು ಅನ್ನುತ್ತೇವೆ.

ಈ ಆನಂದವು ನಮಗೆ ಹೊರಗಿನ ಪರಿಸ್ಥಿತಿ ,ವಸ್ತು,

ವ್ಯಕ್ತಿ ,ಇವುಗಳ ಮೇಲೆ ಅವಲಂಬಿತ ಇರುವದಿಲ್ಲ.

ಇದೇ ಸುಷುಪ್ತಿಯ ವೈಶಿಷ್ಟ್ಯ ಆಗಿರುತ್ತದೆ.

ಈ ಸುಷುಪ್ತಿ ಅವಸ್ಥೆಯಲ್ಲಿನ ದೃಷ್ಟಿಯಿಂದ ,ಜಾಗೃತ

ಮತ್ತು ಸ್ವಪ್ನ ಅವಸ್ಥೆಗಳು ಮಿಥ್ಯಾ ಅನಿಸುತ್ತವೆ.

ಇದೆಲ್ಲ ನೋಡಿದರೆ ಯಾವದು ಸತ್ಯ ಯಾವದು ಮಿಥ್ಯೆ

ಎನ್ನುವದೇ ತಿಳಿಯುವದಿಲ್ಲ.ಇವು ಮೂರಕ್ಕೂ ಮೀರಿದ

ನಮಗೆ ಅಂದರೆ ಸಾಮಾನ್ಯರಿಗೆ ಅನುಭವವೇ ಇಲ್ಲದ

ಅವಸ್ಥೆ ಒಂದಿದೆ ...!!

ಅವಧೂತ ತನಯ 

*"ಜಾನಕಿ ಜೀವನ ಸ್ಮರಣ ಜಯ ಜಯ ರಾಮ"*

ॐॐॐॐॐॐॐॐॐॐॐॐॐॐॐॐॐॐॐॐ

ವಾಸನಾ ತ್ಯಾಗ - Sacrifice of desires

 Study Circle- ಚಿಂತನಾ ಸರಣಿ -24 ದಿ.06-01-23

(ಪ.ಪೂ.ಗುರುಗಳ ಪ್ರವಚನದಿಂದ)

卐卐卐卐卐卐卐卐卐卐卐卐卐卐卐卐卐卐

"ವಾಸನಾ ತ್ಯಾಗ"ಚಿಂತನೆಗೂ ಮೊದಲು,ಆಧ್ಯಾತ್ಮಿಕ ದೃಷ್ಟಿಯಿಂದ ನಾವು ಅಥವಾ ಮನುಷ್ಯರು ಎಷ್ಟು ಅವಸ್ಥೆಗಳ ಮೂಲಕ ಜೀವನ ಮಾಡುತ್ತಿದ್ದೇವೆ ಇವುಗಳ ಕುರಿತು ಇನ್ನೊಮ್ಮೆ ಚಿಂತನೆ ಮಾಡೋಣ.

ಸಾಮಾನ್ಯವಾಗಿ ಜಾಗೃತ ,ಸ್ವಪ್ನ ಹಾಗೂ ಸುಷುಪ್ತಿ

ನಂತರ ಕೊನೆಯ ಹಾಗೂ ಉನ್ನತ ಅವಸ್ಥೆ ಅಂದರೆ

ತುರೀಯ ಅವಸ್ಥೆ.ಈ ಜಾಗೃತ ಅವಸ್ಥೆಯಲ್ಲೂ ಕೂಡಾ

ನಾವು ಮನುಷ್ಯರ ತರಹ ವರ್ತನೆ ಮಾಡುವುದು

ಅಂದರೆ ಉದಾರತನದಿಂದ ಜೀವನ ಮಾಡುವುದು

ಅಂದರೆ , ಇದರಲ್ಲೂ, ಪಾಶವೀಯ ಗುಣದಿಂದ,

ಮಾನವೀಯ ಗುಣಕ್ಕೆ ನಂತರ ದೈವೀ ಗುಣಕ್ಕೆ

ಜೀವನದಲ್ಲಿ ಪರಿವರ್ತನೆ ಆಗಬೇಕು.

ಎಂತೆಂತಹ ವಿದ್ಯಾವಂತರಿರುತ್ತೇವೆ, ಆದರೆ ನಡೆದುಕೊಳ್ಳುವದು ಮಾತ್ರ ಪಶುವಿನ ತರಹ ಇರುತ್ತದೆ.

ಇಲ್ಲಿ ಯಾರ ನಿಂದೆ ಅಥವಾ ಮನಸ್ಸು ನೋಯಿಸುವ

ವಿಚಾರ ನಮಗಿಲ್ಲ.ಆದರೆ ಗುಣಗಳ ಚಿಂತನೆಯ

ದೃಷ್ಟಿಯಲ್ಲಿ ಹೇಗೆ ಹೇಗೆ ಜೀವನ ಮಾಡುತ್ತ ಇರುತ್ತಾರೆ,

ಎಂದರೆ ,ನನ್ನ ವೈಯಕ್ತಿಕ ಅನುಭವ ಹೇಳುತ್ತೇನೆ,

ನಾನು ಅನಿವಾರ್ಯವಾಗಿ ನಮ್ಮ ಮನೆಯಿಂದ

ಕೆಳಗೆ ನೆರಳು ಇರುತ್ತದೆ ಮತ್ತು ಖಾಲಿ ಇರುತ್ತದೆ ಎಂದು

ಕಾರ ಪಾರ್ಕ ಮಾಡಿದಾಗ, ಅಲ್ಲಿನ ದೊಡ್ಡ ಕಂಪೌಂಡ

ಇರುವ ಉತ್ತಮ ವಿದ್ಯಾವಂತ ಸುಶಿಕ್ಷಿತ ಮನೆಯವರು

ದಿನಾಲೂ ಕಾರಿನ ಮೇಲೆ ಕಸ ಹಾಕಿಸುತ್ತಿದ್ದರು.

ಅಲ್ಲಿ ಯಾರೂ ವಾಹನ ನಿಲ್ಲಿಸಬಾರದು, ನಿಜವಾಗಿ

ಅವರಿಗೆ ಯಾವದೇ ರೀತಿಯ ತೊಂದರೆ ಇಲ್ಲದಿದ್ದರೂ

ತಮ್ಮ ಕಂಪೌಂಡ ಪಕ್ಕ ಅನ್ನುವ ಕಾರಣದಿಂದ ಹೀಗೆ

ಮಾಡುತ್ತಾರೆ ಎಂದು ಪರಿಚಯದವರೊಬ್ಬರು ನನಗೆ

ಹೇಳಿದರು.ಇದು ಎಂಥ ನಡವಳಿಕೆ ವಿಚಾರ ಮಾಡಿರಿ.

ಹೀಗೆ ಒಂದು ಅನುಭವ ಆದರೆ, ನನ್ನ ಕೆಲಸದ ನಿಮಿತ್ತ

ಮಿತ್ರರೊಬ್ಬರಿಗೆ ಕರೆ ಮಾಡಿದಾಗ ,ಅವರಿಗೆ ಯಾವದೇ

ರೀತಿಯ ಸಂಬಂಧ ಇಲ್ಲದಿದ್ದರೂ ಅವರು ಕರೆದು 

ಸಹಾಯ ಮಾಡಿದರು.ಇದು ಉದಾರತನದ 

ಮಾನವೀಯ ಭಾವ ಆಗಿರುತ್ತದೆ.ನಾನು ಧನ್ಯವಾದಗಳನ್ನು ಹೇಳಿದಾಗ ಅವರು ಯಾರಾದರೂ

ಸಹಾಯ ಕೇಳಿದಾಗ ,ಕೈಲಾದಷ್ಟು ಸಹಾಯ ಮಾಡುವದು ನನಗೆ ಸೇರುತ್ತದೆ ಎಂದು ಹೇಳಿದರು 

ಇದು ಮಾನವೀಯ ಭಾವನೆ ತೋರಿಸುತ್ತದೆ.

ಇನ್ನು ದೈವೀ ಗುಣದ ಅನುಭವ ಸತ್ಪುರುಷರ

ಜೊತೆ ಬರುವ ಅನುಭವ ಆಗಿರುತ್ತದೆ.ಔದಾರ್ಯತೆಯ

ಉನ್ನತ ಮಟ್ಟದ ಅನುಭವ ಅಲ್ಲಿ ಬರುತ್ತದೆ.

ತಮ್ಮದು ಏನೇ ಆಗಲೀ ಇನ್ನೊಬ್ಬರಿಗೆ ಒಳ್ಳೆಯದೆ

ಆಗಬೇಕು.ಇದು ದೈವೀ ಗುಣ ಆಗಿರುತ್ತದೆ.

ಈಗಾಗಲೇ ನಾವು ಜಾಗ್ರತ, ಗುಣದ ದೃಷ್ಟಿಯಿಂದ

ಸ್ವಪ್ನ ಹಾಗೂ ಸುಷುಪ್ತಿ ಮಿಥ್ಯಾ ಅನಿಸುತ್ತವೆ,

ಸುಷುಪ್ತಿಯಲ್ಲಿ ಇದ್ದಾಗ ಜಾಗ್ರತ ಹಾಗೂ ಸ್ವಪ್ನ

ಮಿಥ್ಯಾ ಅನಿಸುತ್ತವೆ ಇದರಂತೆ ಸ್ವಪ್ನಾವಸ್ಥೆಯಲ್ಲಿ

ಜಾಗ್ರತ ಹಾಗೂ ಸುಷುಪ್ತಿ ಮಿಥ್ಯಾ ಅನಿಸುತ್ತವೆ.ಇದು

ನಮ್ಮೆಲ್ಲರ ಅನುಭವ ಆಗಿರುತ್ತದೆ.ಈಗ ನಮ್ಮ

ಧ್ಯೇಯ ಭಗವಂತನ ದರ್ಶನವಾಗಿರುತ್ತದೆ.ಅಂದರೆ

ಅಖಂಡ ಸಮಾಧಾನ, ಅಖಂಡ ಆನಂದದ ಅನುಭವ

ಪಡೆಯುವದೇ ನಮ್ಮ ಗುರಿಯಾಗಿರುತ್ತದೆ.ಅಂದರೆ

ಸಮಾಧಾನದ ಅಭ್ಯಾಸ ಮಾಡುವದು ನಮ್ಮ ಸಾಧನೆ

ಆಗಿರುತ್ತದೆ.ಭಗವಂತನು ನಮ್ಮ ಅಂತರಂಗದ ಆಳದಲ್ಲಿ

ಇರುವದರಿಂದ ನಾವು ಹೊರಗಿನಿಂದ ಒಳಗೆ

ಅಂದರೆ ಹೊರಗೆ ಓಡುವ ಮನಸ್ಸನ್ನು ಹಿಡಿದು ,ಒಳಗೆ

ಎಳೆದು ಭಗವಂತನ ಕಡೆಗೆ ಹೋಗುವದು ಈ 

ಆಧ್ಯಾತ್ಮಿಕ ಸಾಧನೆ ಆಗಿರುತ್ತದೆ.ಅಂದರೆ ತುರೀಯ

ಅವಸ್ಥೆಯ ಅನುಭವ ಪಡೆಯುವದೇ ಈ ಎಲ್ಲ 

ಸಾಧನೆಗಳ ಗಮ್ಯ ಸ್ಥಾನವಾಗಿರುತ್ತದೆ.ಈ ತುರೀಯ

ಅವಸ್ಥೆಗೆ ಹೋಗುವಾಗ ನಾನಾ ರೀತಿಯ ಅನುಭವಗಳು ಬರುತ್ತವೆ.ಮೊದಲು ಇದ್ದ ಪರಿಸ್ಥಿತಿಯಲ್ಲಿ ಸಮಾಧಾನದಿಂದ ಇರುವ ಅಭ್ಯಾಸ

ಮಾಡಬೇಕು.ನಿಧಾನವಾಗಿ ಜಗತ್ತಿನ ಮೌಲ್ಯ, 

ಆಧ್ಯಾತ್ಮಿಕ ದೃಷ್ಟಿಯಿಂದ ಏನಿದೆ ಅದು ನಮ್ಮ ದೃಷ್ಟಿ

ಆಗಬೇಕು.ಇದು ಬಹಳ ಕಠಿಣ ಇರುತ್ತದೆ.

ನಾಮಸಾಧನೆಯಿಂದ ಯಾವಾಗ ದೇಹಮನಸ್ಸಿನ

ಗಂಟು ಯಾವುದನ್ನು ಚಿಜ್ಜಡ ಅನ್ನುತ್ತಾರೊ, ಅದು

ನಿಧಾನವಾಗಿ ಕಳಚತೊಡಗುತ್ತದೆ.ಆಗಲೆ ನಮಗೆ 

ಬೇರೆ ಬೇರೆ ತರಹದ ಅನುಭವಗಳು, ನಾನಾ

ರೀತಿಯ ದರ್ಶನಗಳು ಆಗುತ್ತವೆ.ಇದು ಎಲ್ಲರಿಗೂ

ಒಂದೇ ರೀತಿ ಆಗುವದಿಲ್ಲ.ಯಾವಾಗ ಸಂಪೂರ್ಣವಾಗಿ

ಚಿತ್ತಶುದ್ಧಿಯಾಗಿ, ನಮ್ಮ ಮನಸ್ಸು ಭಗವಂತನೊಂದಿಗೆ

ತಾದಾತ್ಮ್ಯ ಆಗುತ್ತದೆಯೊ ಆವಾಗ ಸಮಾಧಿ ಅವಸ್ಥೆಯ

ಅನುಭವ ಬರುತ್ತದೆ.ಈ ಅವಸ್ಥೆಯಲ್ಲಿ ನಮಗೆ ಈ

ಜಗತ್ತು ಇದ್ದರೂ ಅಷ್ಟೆ ಇಲ್ಲದಿದ್ದರೂ ಅಷ್ಟೆ ,ಅಂದರೆ

ಜಗನ್ಮಿಥ್ಯಾ ಎಂದು ಹೇಳುವದರ ಪ್ರತ್ಯಕ್ಷ ಅನುಭವ

ಬರುತ್ತದೆ.ಇದರ ಅಪ್ರತಿಮ ಉದಾಹರಣೆ ಶ್ರೀ

ಮಹಾರಾಜರು ಹೇಳಿರುತ್ತಾರೆ.ತಂದೆ ಮಗ ಕೂಡಿ ಸಕ್ಕರೆ

ಗೊಂಬೆ ತರಲು ಅಂಗಡಿಗೆ ಹೋದಾಗ, ತಂದೆ

ಹೇಗೆ ಕಿಲೊ ಎಂದು ಕೇಳಿದರೆ, ಮಗ ನನಗೆ ,ಆನೆ, ಒಂಟೆ

ಬೇರೆ ಬೇರೆ ಗೊಂಬೆಗಳ ಹೆಸರು ಹೇಳಿ ಅವೆಲ್ಲ ಬೇಕು

ಎಂದು ಹೇಳುತ್ತಾನೆ.ಇಲ್ಲಿ ಆ ಮಗನ ಮನೋ ಭೂಮಿಕೆ

ಏನು ಇದೆಯೋ ಅದು ನಮ್ಮ ಸದ್ಯದ ಭೂಮಿಕೆ

ಆಗಿದೆ.ಅಂದರೆ ಇಂತಹ ಮನೆ ಬೇಕು, ವಾಹನ ಬೇಕು,

ಅದು ಬೇಕು ,ಇದು ಬೇಕು ಎಂದು ನಾವು ಅಂದರೆ,

ಸತ್ಪುರುಷರು ಹೀಗೆಲ್ಲ ಬೇಕು ಎಂದು ಹೇಳವುದಿಲ್ಲ.

ಅವರಿಗೆ ಅದರ ಸರಿಯಾದ ಆಕಲನ ಇರುತ್ತದೆ.

ಈಗ ನಮಗೇಕೆ ಇದು ಸಾಧಿಸುವದಿಲ್ಲ ಅಂದರೆ,.ವಸ್ತು ಸ್ಥಿತಿ ಜಾಗ್ರತ ಅಂದರೆ ದೃಶ್ಯದ್ದು ಇದೆ, ಆದರೆ ಧ್ಯೇಯ

ಸ್ಥಿತಿ ಅದೃಶ್ಯ, ಅವ್ಯಕ್ತ, ಅಮೂರ್ತ ಸ್ಥಿತಿಯಲ್ಲಿ ಇದೆ.

ಈ ದೃಶ್ಯದಿಂದ ಅಮೂರ್ತ ಅವ್ಯಕ್ತದ ಕಡೆಗೆ

ಹೋಗುವದು ಎಂದರೆ ದೃಶ್ಯ ಜಗತ್ತಿನ ಮೌಲ್ಯ 

ಬದಲಾವಣೆ ಆಗುತ್ತ ಹೋಗುವದು.

ಸಮಾಧಾನದಿಂದ ಇದ್ದ ಪರಿಸ್ಥಿತಿಯಲ್ಲಿ ಇರುತ್ತ ಇರುತ್ತ

ಪರಿಸ್ಥಿತಿ ರಹಿತ ಸಮಾಧಾನ ಹೊಂದುಬೇಕು.ಇದು

ಅತ್ಯಂತ ಸೂಕ್ಷ್ಮ ಪ್ರಕ್ರಿಯೆ ಆಗಿರುತ್ತದೆ.ನಾಮದ ಅಭಿರುಚಿ, ನಾಮದಲ್ಲಿ ಮನಸ್ಸು ರಮಿಸುವಿಕೆಯ ಪ್ರಮಾಣ ಹೇಗೆ ಹೇಗೆ ಹೆಚ್ಚುತ್ತ ಹೋಗುವದೋ 

ಹಾಗೆ ಸಮಾಧಾನದ ಪ್ರಮಾಣ ಏರುತ್ತ ಹೋಗುವುದು.

ಇದನ್ನೇ ಹೇಗೆ ಸಾಧಿಸುವದು, ? ಇಲ್ಲಿಯೇ ವಾಸನಾ

ತ್ಯಾಗದ ಚಿಂತನೆ ಬೇಕಾಗುತ್ತದೆ!!.....

ಅವಧೂತ ತನಯ

*"ಜಾನಕಿ ಜೀವನ ಸ್ಮರಣ ಜಯ ಜಯ ರಾಮ"*

ॐॐॐॐॐॐॐॐॐॐॐॐॐॐॐॐॐॐॐ

Thursday, January 5, 2023

Turiya State - ತುರ್ಯಾವಸ್ಥೆ- Fourth state of consciousness

 Study Circle- ಚಿಂತನಾ ಸರಣಿ -23 ದಿ.06-01-23

(ಪ.ಪೂ.ಗುರುಗಳ ಪ್ರವಚನದಿಂದ)

卐卐卐卐卐卐卐卐卐卐卐卐卐卐卐卐卐卐

ಮೂಕನಿಗೆ ಹೇಗೆ ಸಕ್ಕರೆಯ ಸವಿಯನ್ನು ಹೇಳಲು

ಹೇಳಿದರೆ , ಅಥವಾ ಚಿಕ್ಕ ಬಾಲಕನಿಗೆ ಯಾವರೀತಿ

ಪ್ರೌಢತನದ ಬಗೆಗೆ ಹೇಳಲು ಬರುವದಿಲ್ಲವೊ ಅದೇ

ರೀತಿ ತುರೀಯ ಅಥವಾ ತುರ್ಯಾವಸ್ಥೆಯ ಬಗೆಗೆ

ಹೇಳುವುದು ಕಠಿಣವಿರುತ್ತದೆ.ಹುಟ್ಟಿನಿಂದ ನಮ್ಮ

ಆಯುಷ್ಯದುದ್ದಕ್ಕೂ ಕೇವಲ ಜಾಗೃತ್ ,ಸ್ವಪ್ನ ಮತ್ತು

ಸುಷುಪ್ತಿಗಳಲ್ಲಿ ಇರುವ ನಮಗೆ ನಾಲ್ಕನೆಯ ಮತ್ತು

ಉನ್ನತ ಅವಸ್ಥೆಯಾದ ತುರ್ಯಾವಸ್ಥೆ ಅಥವಾ

ಸಮಾಧಿ ಅವಸ್ಥೆ ಇವುಗಳ ಬಗೆಗೆ ಚಿಂತನೆ ಮಾಡುವ

ಪ್ರಯತ್ನ ಮಾಡೋಣ.ಸದ್ಯಕ್ಕೆ ನಮಗೆ ತೀವ್ರ ಆನಂದ

ಉಂಟು ಮಾಡುವ ಅವಸ್ಥೆ( ಉಪಾಧಿ ರಹಿತ) ಆದದ್ದು

ಸುಷುಪ್ತಿ ಆಗಿರುತ್ತದೆ.ಇದಕ್ಕೂ ಮೇಲಿನ ತುರೀಯ

ಅವಸ್ಥೆಯಲ್ಲಿ ಜ್ಞಾನದ ಅನುಭವ ಇರುತ್ತದೆ.ಇದು

ಮಲಿನ ರಹಿತ ಮನಸ್ಸು ಹಾಗೂ ಬುದ್ಧಿಗೆ ಬರುವ ವಿಶಿಷ್ಟ ಅನುಭವ ಆಗಿರುತ್ತದೆ.ಅಂದರೆ ಜ್ಞಾನಚಕ್ಷು ಅಥವಾ ಅಂತರ್ಮನ ಎಚ್ಚರ ಇರುತ್ತದೆ.ಆದ್ದರಿಂದ

ಇದನ್ನು "ಜಾಗೃತ್ ಸುಷುಪ್ತಿ" ಎಂದೂ ಕರೆಯುತ್ತಾರೆ.

ಅಂದರೆ ಜಾಗೃತ ಇದ್ದಾಗ ಸುಷುಪ್ತಿಯ ಆನಂದ

ಅಂದರೆ ಉಪಾಧಿರಹಿತ ಆನಂದದ ಅನುಭವ 

ಇರುತ್ತದೆ.ಭಗವಂತನ ಮನಸ್ಸು ಅಥವಾ ವಿಶ್ವ ಮನಸ್ಸು

(ಕಾಸ್ಮಿಕ್ ಮೈಂಡ) ಇದರೊಂದಿಗೆ ತಾದಾತ್ಮ್ತತೆಯ ಅನುಭವ ಸಮಾಧಿ ಅಥವಾ ತುರ್ಯಾವಸ್ದೆ ಆಗಿರುತ್ತದೆ.ಭಗವಂತನ ಶಾರದಾ ಶಕ್ತಿಯ ಹಾಗೂ 

ಗುರುಕೃಪೆಯಿಂದ ಯೋಗಿಗಳು ಸಮಾಧಿ ಅವಸ್ದೆ

ಸಾಧಿಸುತ್ತಾರೆ.ಅದೇ ರೀತಿ ಸಾಧುಗಳು ಅಂದರೆ 

ಸಾಧಕರು ತುರ್ಯಾವಸ್ಥೆಯನ್ನು ಮುಟ್ಟುತ್ತಾರೆ.

ಇದಕ್ಕೆ ಸದ್ಗುರು ಕೃಪೆ ಹಾಗೂ ಪುಣ್ಯವಿಶೇಷ ಎರಡೂ

ಬೇಕಾಗುತ್ತವೆ.ಶ್ರೀ ಮಹಾರಾಜರ ಶಿಷ್ಯರೊಬ್ಬರಾದ

ಶ್ರೀ ಮಹಾಭಾಗವತರು ,ಸಮಾಧಿ ಅವಸ್ಥೆಯ ಅನುಭವ ಕೇಳಿದಾಗ ಶ್ರೀ ಮಹಾರಾಜರು ಕೃಪೆ ಮಾಡಿ

ಅವರಿಗೆ ಅದರ ಅನುಭವ ನೀಡುತ್ತಾರೆ.ಅವರು

ಸುಮಾರು ಅರ್ಧಗಂಟೆಗಳಾದ ಮೇಲೆ ಮತ್ತೆ ಸಾಮಾನ್ಯ

ಅವಸ್ಥೆಗೆ ಬಂದಾಗ ಶ್ರೀ ಮಹಾರಾಜರು ನಿಮ್ಮ

ಪುಣ್ಯಾಂಶ ಅಷ್ಟೇ ಇತ್ತು ಆದ್ದರಿಂದ ಹೀಗೆ ಆಯಿತು

ಎನ್ನುತ್ತಾರೆ.ಇನ್ನು ಇದನ್ನೂ ಮೀರಿ ಅಂದರೆ ತುರ್ಯಾತೀತ ಅವಸ್ಥೆಯಲ್ಲಿ ಕೆಲವು ಸತ್ಪುರುಷರು 

ಇರುತ್ತಾರೆ.ಉದಾಹರಣೆಗೆ ಶ್ರೀ ಮಹಾರಾಜರು, 

ಹೀಗೆ ಇರುತ್ತಿದ್ದರು.ಆದ್ದರಿಂದ ಅವರ ಬಗೆಗೆ

ಹೇಳುವಾಗ ತುರ್ಯಾತೀತ ಅವಸ್ಥಾ ಆಹೆ ನಿರಂತರ

ಎಂದು ಹೇಳುತ್ತಾರೆ.ಅಂದರೆ ಇಂತಹವರು

ಅಸಾಮಾನ್ಯ ಸತ್ಪುರುಷರಿರುತ್ತಾರೆ.ಇವರ ನಿತ್ಯ

ವ್ಯವಹಾರದಲ್ಲಿ ಎಲ್ಲವನ್ನೂ ಮಾಡುತ್ತಾರೆ, 

ಕೋಪಿಸುತ್ತಾರೆ,ಜಗಳವಾಡುತ್ತಾರೆ ,ಬಯ್ಯುತ್ತಾರೆ,

ನಮ್ಮಕ್ಕಿಂತಲೂ ವ್ಯವಹಾರಿಕ ಬುದ್ಧಿ ತೋರಿಸುತ್ತಾರೆ,

ಆದರೆ ಯಾವುದರಲ್ಲೂ ಅಂದರೆ ,

ಕೋಪ,ದ್ವೇಷ,ಮೋಹ ಲೋಭ ಇಂಥವುಗಳಲ್ಲಿ ಎಂದೂ

ಸಿಲುಕಿಕೊಳ್ಳುವದಿಲ್ಲ.ಶ್ರೀ ಮಹಾರಾಜರ ಚರಿತ್ರೆಯಲ್ಲಿ

ಇಂಥ ನಾನಾ ಪ್ರಸಂಗಗಳನ್ನು ನೋಡಬಹುದು.

ಒಬ್ಬರಿಗೆ ಬಯ್ಯುತ್ತಿದ್ದಾಗ, ಮತ್ತೊಬ್ಬರು ಭಗವದ್ಗೀತೆಯ ಶ್ಲೋಕವೊಂದರ ಮೂಲಕ ಸಿಟ್ಟಿನ ಬಗೆಗೆ ಕೇಳಿದಾಗ ತಡೆಯಿರಿ ಈ ಕೋಪವು ಕುತ್ತಿಗೆ 

ಮೇಲಿನದಾಗಿರುತ್ತದೆ ಎಂದು ಹೀಂದೆ ತಿರುಗಿ

ಶಾಂತವಾಗಿ ಹೇಳುತ್ತಾರೆ.ಇದು ಓದಲು ,ಕೇಳಲು

ಸಹಜವೆನಿಸುತ್ತದೆ .ಆದರೆ ಪ್ರತ್ಯಕ್ಷವಾಗಿ ನೋಡಿದಾಗ

ಹೀಗೆ ಮಾಡುವುದು ಎಷ್ಟು ಕಠಿಣ ಇರುತ್ತದೆ.

ನಾನೂ ಪ.ಪೂ.ಗುರುಗಳೊಂದಿಗೆ ಇಂಥ

ಕೆಲವು ಪ್ರಸಂಗ ನೋಡಿದ್ದೇನೆ.ಎಂತಹ ಕೋಪ

ಒದರಾಟ, ಅನಬಾರದ್ದನ್ನು ಅನಿಸಿಕೊಂಡು,

ಶಾಂತವಾಗಿ ಇದ್ದು ಎಲ್ಲ ಮುಗಿದ ಮೇಲೆ

ಅವರು ಇಡೀ ವಾತಾವರಣವನ್ನೇ ತಮ್ಮ

ಆಶೀರ್ವಚನದ ಪ್ರಭಾವದ ಮೂಲಕ ಬದಲಾಯಿಸಿ

ಬಿಟ್ಟರು.ನಮ್ಮ ವೈಯಕ್ತಿಕ ಸಾಧನೆ ಬಹಳ ಕಡಿಮೆ

ಇರುವದರಿಂದ ಅವರು ನಮಗೆ ಅರ್ಥವಾಗುವದಿಲ್ಲ

ಅವರು ಇರುವ ಭೂಮಿಕೆ ಎಂತಹುದು ಎಂಬುದು

ನಮಗೆ ಅರಿವಿಗೆ ಬರುವದಿಲ್ಲ ಅಷ್ಟೆ.ಅವರಾಗಿಯೆ 

ಏನಾದರೂ ಹೇಳಿದಾಗ, ಈ ಚಿಂತನೆಯ ಸಮಯದಲ್ಲಿ

ಒಂದು ಸಲ "ನನ್ನ ಸಮಾಧಾನ ಭಂಗ ಮಾಡುವ

ಪ್ರಯತ್ನ ಮಾಡಿರಿ ಇದು ನನ್ನ ಚಾಲೇಂಜ"ಎಂದು

ಅಂದಾಗ, ಮತ್ತೊಮ್ಮೆ.,ಇಲ್ಲಿ ಇರುವವರು, ಇಲ್ಲಿ 

ನಡೆಯುತ್ತಿರುವದೆಲ್ಲ ಚಲನ ಚಿತ್ರದ ಹಾಗೆ ಅನಿಸುತ್ತದೆ,

ಎಲ್ಲರೂ ಆಚೀಚೆ ತಮ್ಮ ತಮ್ಮ ಕೆಲಸಗಳಿಗಾಗಿ

ಧಡಪಡಿಸುತ್ತ ಓಡಾಡುತ್ತಿದ್ದಾರೆ, ಆದರೆ ಇದಾವೂದು

ತಮಗೆ ಅನಿಸುವದಿಲ್ಲ ಎಂದು ಹೇಳಿದಾಗ, ಎಲ್ಲದರ

ಜವಾಬ್ದಾರಿ ಅವರದೇ ಇರುತ್ತದೆ, ಆದರೂ ಈ ರೀತಿ

ಇರುತ್ತಾರೆ ಎಂದಾಗ ಅವರ ಹಾಗೂ ನಮ್ಮ 

ಮಾನಸಿಕ ಭೂಮಿಕೆಯಲ್ಲಿ ತುಂಬಾ ವ್ಯತ್ಯಾಸವಿದೆ,

ಅವರು ತುಂಬಾ ಎತ್ತರದ ಉನ್ನತ ಅವಸ್ಥೆಯಲ್ಲಿ 

ಇದ್ದರೆ ನಮ್ಮದು ನೆಲದ ಮೇಲೆ ಇರುವ ಅವಸ್ಥೆ 

ಇರುತ್ತದೆ.ನನಗೆ ಅದನ್ನು ಸರಿಯಾಗಿ ಹೇಳಲೂ 

ಬರುವದಿಲ್ಲ ,ಕ್ಷಮಿಸಬೇಕು.ಈ ಬರೆಯುವದೂ ಅವರ ಆಶೀರ್ವಾದವೇ ಇರುತ್ತದೆ. ಅವರೂ ಶ್ರೀ ಮಹಾರಾಜರ ಹಾಗೆ ತುರ್ಯಾತೀತ ಅವಸ್ಥೆಯಲ್ಲ ಇದ್ದರೂ ಇರಬಹುದು ನಮಗೆಲ್ಲಿ ಅರ್ಥವಾಗುತ್ತದೆ.

ಇರಲಿ ,ಈ ರೀತಿಯಾದ ತುರೀಯ ,ತುರ್ಯಾತೀತ

ಅವಸ್ಥೆಗಳೂ ಇರುತ್ತವೆ.ಇದರ ಗಾಢತೆಯ ಪರಿಣಾಮದಿಂದ ಸತ್ಪುರುಷರ ದೇಹವೂ ಚಿನ್ಮಯ

ಆಗುತ್ತದೆ.ಇಂತಹ ಸತ್ಪುರುಷರಿಂದ ಕೋಟ್ಯಾವಧಿ ಜನರ ಉದ್ಧಾರವಾಗುತ್ತದೆ.ದೇಹದಿಂದ ಇದ್ದಾಗ ಹೇಗೊ ಅದಕ್ಕಿಂತ ಹೆಚ್ಚು ಕಾರ್ಯ ದೇಹ ಬಿಟ್ಟ ಮೇಲೂ ಮಾಡಬಲ್ಲರು.ಪ.ಪೂ.ಗುರುಗಳು 

ಏನು ಹೇಳುತ್ತಾರೆ ಅಂದರೆ, ದೇವರು ನಮಗೆ ಸ್ವಲ್ಪ

ಬುದ್ಧಿ ಶಕ್ತಿ, , ವಿಚಾರ ಶಕ್ತಿ ಹಾಗೂ ತಿಳುವಳಿಕೆ

ಕೊಟ್ಟಿದ್ದಾನೆ, ನಾಲ್ಕಾರು ಪುಸ್ತಕ ಓದುತ್ತೇವೆ, ಒಂದಷ್ಟು

ಪ್ರವಚನ ಕೇಳುತ್ತೇವೆ, ನಂತರ ಎಲ್ಲ ತಿಳಿದವರ ಹಾಗೆ

ವ್ಯವಹಾರ ಮಾಡುತ್ತೇವೆ, ಇವೆಲ್ಲಕ್ಕೂ ಮೀರಿದ

ಎಷ್ಟೋ ಅವಸ್ಥೆಗಳು ಇವೆ ಎಂಬುವದರ ಬಗೆಗೆ

ವಿಚಾರ ಮಾಡದೆ ,ಸರಿಯಾಗಿ ಸಾಧನೆಗೆ ತೊಡಗದೆ,

ವ್ಯರ್ಥ ಆಯುಷ್ಯ ಕಳೆದುಕೊಂಡು ಬಿಡುತ್ತೇವೆ.

ಇದು ನಿಜವೇ ಇರುತ್ತದೆ.ಶಬ್ದಜ್ಞಾನ ಎಷ್ಟು ಬೇಕು

ಅಷ್ಟೇ , ಅನುಭವ ಜ್ಞಾನ ಮಹತ್ವದ್ದು ಇರುತ್ತದೆ.

ನಮ್ಮ ಭಾರತೀಯ ತತ್ವಜ್ಞಾನ ವೈಶಿಷ್ಟ್ಯ ಎಂದರೆ

ಹೊರಗಿನ ವಿದ್ಯೆ ಎಷ್ಟೇ ಇರಲಿ ಅಥವಾ ಇಲ್ಲದಿರಲಿ

ಕೇವಲ ನಾಮಸ್ಮರಣೆ ,ಭಗವಂತನ ,ಸದ್ಗುರುಗಳ

ಲೀಲೆ ಗಳ ಚಿಂತನೆ ,ನಾಮದ ಅನುಸಂಧಾನ ಮಾತ್ರದಿಂದ ಈ ಎಲ್ಲ ಅವಸ್ಥೆಗಳನ್ನು ಸಾಮಾನ್ಯರು

ಕೂಡಾ ಪಡೆದುಕೊಳ್ಳಬಹುದು.ಇದು ಜಗತ್ತಿಗೆ ,

ಮಾನವ ಕುಲಕ್ಕೆ ಸನಾತನದ ಕೊಡುಗೆಯಾಗಿರುತ್ತದೆ.

ವಾಸನಾ ತ್ಯಾಗದ ಚಿಂತನೆ ಮಾಡೋಣ

ಈ ವಾಸನಾ ,ವಾಸನಾ ಎಂದರೆ ಭಗವಂತನ ನೆರಳು

ಅಥವಾ ಅವನ ..!...

ಅವಧೂತ ತನಯ

*" ಜಾನಕಿ ಜೀವನ ಸ್ಮರಣ ಜಯ ಜಯ ರಾಮ"*

Thursday, October 17, 2019


VISIT TO BREMEN

Bremen is one of the best cities to visit in Germany. This city is a real fairy tales place, history and legends are making this place an unique scenario to visit. One day will be enough to visit the important places, the airport is so close to the city centre. In Bremen will be the best idea to enjoy the city and take the best of the German culture and tradition. There are many day trips from Bremen are possible, such as Hamburg (a major port city in northern Germany) and Lübeck (a northern German city distinguished by Brick Gothic architecture).
The city of Bremen is not too big, even the city centre is so tiny and cute with beautiful landscape and amazing river long walk. Here are some of the interesting places of Bremen.

1.      Bremen Hauptbahnhof: Bremen's first train station was opened in 1847 on the site of today's station, on the line to Hanover

2.      Mühle am Wall: The first windmill on this site was constructed in 1699.The building has been destroyed by fire and rebuilt a number of times, but the current construction was completed in 1898. This design rests on an eight sided base and the upper part is steered by a wind vane. The four sails of the windmill are shuttered. This type of design is known as a smock mill or Galerieholländer.

3.      Weser power station Bremen: The new Weser power plant Bremen at the Weserwehr in Bremen- Hastedt was put into operation in 2011 after three years of construction - about 24 years after the shutdown of its predecessor

4.      The Town Musicians of Bremen: (German: Die Bremer Stadtmusikanten) is a popular fairy tale retrieved and recorded by the Brothers Grimm. It was first published in Grimms' Fairy Tales in 1819. It tells the story of four aging domestic animals, who after a lifetime of hard work are neglected and mistreated by their former masters. Eventually, they decide to run away and become town musicians in the city of Bremen.

5.      Bremen Pig Herder Statue: This statue can't be avoided in Bremen. Right in the middle of the main street to the shopping area and market place in the Altstadt (Old town). Probably one has to queue/wait, due to it's popularity, to get a clear photo.

6.      Mercedes Benz Werk:

Tradition meets future: Mercedes-Benz cars have been rolling off the assembly lines at the Bremen plant for the last 40 years. Starting off with the S123 model, the plant has become a success story for northern Germany. With around 12,500 employees, the Mercedes-Benz Bremen plant is the largest private employer in the region. Ten models are currently being produced at the location: the C-Class sedan, wagon, coupé, and convertible; the E-Class coupé and convertible; the GLC SUV; the GLC coupé; and the SLC and SL roadsters. The Bremen plant is the lead plant steering the worldwide production of the C-Class and the GLC.

7.      Unser Planet – a sculpture outside the Deutsche bank. it was made by the German sculptor Bernd Altenstein.
8.      Panoramic view of Bremen City Center:

9.      Rotating mechanism in Bremen:
               https://www.youtube.com/watch?v=J4M3uHSHcN0

1.   Skaters rally in Bremen: